ಬುಧವಾರ, ನವೆಂಬರ್ 24, 2010

ಹಗಲಿರುಳು ಕಾಡಿದೆ ನೋವು


ಹಗಲಿರುಳು ಕಾಡಿದೆ ನೋವು ಅಗಲಿರಲು ಹೀಗೆ ನಾವು
ನನ್ನ ನಿನ್ನ ನಡುವೆ ಒಂದು ಕಣಿವೆ ಬಿದ್ದಿದೆ
ಆಚೆ ಕೋಟೆ ಎದ್ದಿದೆ II

ಬಿರುಬಿಸಿಲ ಹಗಲಲ್ಲಿ ಪಹರೆ ರಣಹದ್ದುಗಳು
ಕಾರಿರುಳ ಮರೆಯಲ್ಲಿ ಗೂಢಚಾರಿ ನೆರಳುಗಳು
ಎದ್ದ ಕೋಡುಗಲ್ಲುಗಳಲಿ ಬಂದೂಕಿನ ಕಣ್ಣುಗಳು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

ಬೀಸುತಿರುವ ಗಾಳಿಯಲ್ಲಿ ಪಿಸುಮಾತಿನ ಸಂಚುಗಳು
ಚೂಪಾದ ಮುಳ್ಳಿನ ಮುಖಕೆ ಹೂವಿನ ಮುಖವಾಡಗಳು
ಮುರಿದು ಬಿದ್ದ ಸೇತುವೆ ಹಲವು ತಲೆ ಹೊಡೆದ ಕಂಭದ ಸಾಲು
ಪ್ರಿಯತಮೆ ನಿನ್ನನು ಹೇಗೆ ಸೇರಲಿ? II

                                                   - ಎಚ್.ಎಸ್. ವೆಂಕಟೇಶ ಮೂರ್ತಿ
                                                   ' ಗೀತ ಸಂಪದ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Vaasanti.php

ಕಾಮೆಂಟ್‌ಗಳಿಲ್ಲ: