ಸೋಮವಾರ, ಡಿಸೆಂಬರ್ 30, 2013

ಮದ್ದಲೆ ದನಿಗೆ ಎದ್ದು ಕುಣಿವ ಕವಿತೆಗಳು!



        'ಕಾಡು ಕುದರಿ ಓಡಿ ಬಂದಿತ್ತ' ಎಂಬ ಹಾಡನ್ನು ನಾನು ಕೇಳಿದ್ದೆನಾದರೂ ಅದೊಂದು ಜಾನಪದಗೀತೆ ಎಂದೇ ತಿಳಿದಿದ್ದೆ. ನಾಟಕಕಾರ, ಕಾದಂಬರಿಕಾರರಾಗಿ ನನಗೆ ಗೊತ್ತಿದ್ದ ಡಾ. ಚಂದ್ರಶೇಖರ ಕಂಬಾರರು ಕವಿಯೂ ಹೌದು ಎಂದು ನನಗೆ ತಿಳಿದದ್ದು ತಡವಾಗಿ! ಎಂಥ ಅದ್ಭುತ ಕವಿ!

         ಕಂಬಾರರ ಕಾವ್ಯಶೈಲಿಗೆ ಮನಸೋತು ನಾನೀಗಾಗಲೆ ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ. ಉತ್ತರ ಕನ್ನಡದ ದೇಸಿ ಕನ್ನಡ ಸೊಗಡಿನ ಅವರ ಕವಿತೆಗಳ ಪ್ರತಿ ಪದವೂ ಅತ್ಯಂತ ನಿರಾಯಾಸವಾಗಿ, ಸಹಜವಾಗಿ ಜೋಡಿಸಿದಂತಿವೆ. ಅವರ ಕೆಲವು ಕವಿತೆಗಳನ್ನು ಓದುವಾಗ ನನಗೆ, ಮದ್ದಲೆ ದನಿ ಕೇಳಿ ಅವು ಎದ್ದು ಕುಣಿಯುತ್ತಿವೆಯೇನೋ ಎಂಬ ಭಾವವುಂಟಾಯಿತು. ಅಂಥ ಲಯಬದ್ಧತೆ, ಹುಮ್ಮಸ್ಸು ಅವರ ಕವಿತೆಗಳಲ್ಲಿವೆ. ಅಲ್ಲಲ್ಲಿ ಗದ್ಯದ ರೀತಿ ಕಂಡರೂ, ಸತ್ವಶಾಲಿಯಾದ ವಸ್ತು ನಮ್ಮನ್ನು ಹಿಡಿದಿಡುತ್ತದೆ.

         ಅವರ 'ಕಾಡುಕುದುರೆ'ಯಂತೂ ಹುಚ್ಚೆದ್ದ ಕುದುರೆಯೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. 'ರೆಕ್ಕೆಯ ಹುಳು' ಭ್ರಮೆಯಿಂದ ವಾಸ್ತವಕ್ಕಿಳಿಸಿದರೆ, ಇನ್ನು ’ಆ ಮರ ಈ ಮರ’ವು ಪ್ರತಿ ಓದಿನಲ್ಲೂ ಹೊಸ ಒಳಾರ್ಥದಿಂದ ಸೋಜಿಗಗೊಳಿಸಿ ನನ್ನ ನೆಚ್ಚಿನ ಕವಿತೆಯಾಗಿಬಿಟ್ಟಿದೆ.

        ಇಷ್ಟೆಲ್ಲಾ ಹೇಳಿ, ಕುತೂಹಲ ಮೂಡಿಸಿ ನಿಮ್ಮನ್ನು ಸುಮ್ಮನೆ ಬಿಟ್ಟರಾದೀತೆ? :)
        ಇಗೊ, ಇಲ್ಲಿವೆ ಅವರ ಕೆಲವು ಕವಿತೆಗಳು, ನಿಮ್ಮ ಓದಿಗಾಗಿ.. ಓದಿ, ಪ್ರತಿಕ್ರಿಯಿಸಿ..

ಅಕ್ಕರೆಯಿಂದ,
ಕನಸು..

1 ಕಾಮೆಂಟ್‌:

Unknown ಹೇಳಿದರು...

ಕನಸು ತಮ್ಮ ಕನ್ನಡ ಪ್ರೇಮಕ್ಕೆ ಸಾಟಿಯಿಲ್ಲ ಕನ್ನಡ ಕಾವ್ಯಲೋಕದ ಅದ್ಬುತ ಕವನಗಳನ್ನು ನಮ್ಮ ಮುಂದೆ ತಂದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು .. ಹೀಗೆ ಹಲವಾರು ಪ್ರಮುಖ ಕವನಗಳು ಹೆಚ್ಚು ಹೆಚ್ಚು ಮೂಡಿ ಬರಲಿ