ಬುಧವಾರ, ಡಿಸೆಂಬರ್ 18, 2013

ಮೌನ 

ಏಕೆ ಮೌನವ ತಾಳಿದೆ 
ನೀನೇಕೆ ಮಾತನು ಹೂಳಿದೆ
ನಾಳೆಗೊಂದು ಬಾಳಿದೆ 
ಎಂದು ಲೋಕವು ನಂಬಿದೆ. 

ಕಾಳಮೇಘವು ತುಂಬಿದೆ, ನಿಜ,
ಸೂರ್ಯನನ್ನೇ ನುಂಗಿದೆ,
ಆದರೂ ಮಳೆ ಬರಲಿದೆ,
ಬಾನು ತಿಳಿಯಲು ಕಾದಿದೆ, ಅದ 
ನಂಬಬಾರದು ಏತಕೆ?
ಬರಿದೆ ಅಳುವುದೆ ಭೂತಕೆ?

ಬೇಸಗೆಯು ಬರಬಾರದೆ?
ಬಿಸಿಲು ಮಳೆಯನು ತಾರದೆ?
ಬಿಸಿಲ ಸುಮ್ಮನೆ ದೂರದೆ 
ಸುಮ್ಮನೇ ಇರಬಾರದೆ?
ಪೈರು ಬಾರದು ಎಂದು ಅಳುವುದೆ?
ಕಾಳು ನೆಲದಲ್ಲೂರದೆ?

ಬೆಂಕಿಪ್ರಳಯದ ಊಹೆಗೆ 
ನೀನು ಉರಿವುದೆ ಪ್ರೇಯಸಿ?
ನನ್ನ ನಂಬದೆ ನೀನು ಅಳುವುದೆ?
ನನ್ನ ಸುಮ್ಮನೆ ನೋಯಿಸಿ?

                                 - ಸುಮತೀಂದ್ರ ನಾಡಿಗ 

ಕಾಮೆಂಟ್‌ಗಳಿಲ್ಲ: