ನೆನಪಾಗಿ ಬಾರದಿರು
ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ -
ಎಂದೊ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ -
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.
ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ ;
ಸಿಂಗರಿಸದಿರು ನನ್ನ ಚಿತೆಯ, ನಗೆಯನು ಹೊಯ್ದು
ನಾನೆ ಬೆಳೆಸಿದ ಹೂವ ಗೊಂಚಲಲ್ಲಿ.
ಯೌವನದ ಹೊಸ್ತಿಲಲಿ ಕಟ್ಟಿದ್ದ ತೋರಣದ
ಕನಸ ತರಗೆಲೆಗಳನು ಬರಿದು ಮಾಡು ;
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕದಿರಲೆದೆ ತುಂಬ ಜೇನುಗೂಡು.
ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು :
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ ;
ಹೃದಯದೊಳನೋವುಗಳ ಬಿರಿಸುವರೆಮರೆಮಾತು -
ಮಾಯ್ದ ಗಾಯವ ಮತ್ತೆ ಗೀಚಬೇಡ!
ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೊ ಮುಗಿದಿರುವ ದೀಪಗಳನು ;
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು.
- ಕೆ.ಎಸ್. ನಿಸಾರ್ ಅಹಮದ್
' ನಿತ್ಯೋತ್ಸವ '
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.
ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ ;
ಸಿಂಗರಿಸದಿರು ನನ್ನ ಚಿತೆಯ, ನಗೆಯನು ಹೊಯ್ದು
ನಾನೆ ಬೆಳೆಸಿದ ಹೂವ ಗೊಂಚಲಲ್ಲಿ.
ಯೌವನದ ಹೊಸ್ತಿಲಲಿ ಕಟ್ಟಿದ್ದ ತೋರಣದ
ಕನಸ ತರಗೆಲೆಗಳನು ಬರಿದು ಮಾಡು ;
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕದಿರಲೆದೆ ತುಂಬ ಜೇನುಗೂಡು.
ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು :
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ ;
ಹೃದಯದೊಳನೋವುಗಳ ಬಿರಿಸುವರೆಮರೆಮಾತು -
ಮಾಯ್ದ ಗಾಯವ ಮತ್ತೆ ಗೀಚಬೇಡ!
ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೊ ಮುಗಿದಿರುವ ದೀಪಗಳನು ;
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು.
- ಕೆ.ಎಸ್. ನಿಸಾರ್ ಅಹಮದ್
' ನಿತ್ಯೋತ್ಸವ '
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ