ಕಾವ್ಯ ಪ್ರೇಮಿಗಳೇ,
ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..
'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..
ಅಕ್ಕರೆಯಿಂದ,
ಕನಸು..
ಕನಸು..