ಸೋಮವಾರ, ಜನವರಿ 13, 2014

ಎಂದೂ ಕಾಣದಂಥ ಕನಸು

ಎಂದೂ ಕಾಣದಂಥ ಕನಸು
ಬಂದು ಮನವ ತಾಗಿತು
ಬಂದ ಗಳಿಗೆ ಎಂತೊ ಏನೊ
ಅಲ್ಲೆ ಮನೆಯ ಹೂಡಿತು

ನಿಂತ ಕಡೆಯೆ ಬೇರನೂರಿ
ಆಳ ಅಗಲ ಹರಡಿತು
ಧಗೆ ತುಂಬಿದ ನೆಲದ ಎದೆಗೆ
ಹಸಿರು ಮಾತ ಉಸುರಿತು

ತೀರುತಿರುವ ಹರುಷದಂತೆ
ಆರುತಿರುವ ದೀಪವು
ಮೀರಿ ಉರಿದು ಕೊರಗು ಹರಿದು
ಕೊನೆಯಾಯಿತು ಶಾಪವು

ಜೀವ ಭಾವ ಕಾವು ನಿಂತು
ಬೆರಗು ಮುಳ್ಳು ಕಲ್ಲಿಗೂ
ಕವಿತೆ ಬೆಳೆದ ಕಂಪು ಬಂತು
ಅಲ್ಲಿ ಇಲ್ಲಿ ಎಲ್ಲಿಗೂ

                                                         - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: