ಸೋಮವಾರ, ನವೆಂಬರ್ 8, 2010

ಏಕೆ ಹೀಗೆ


ಏಕೆ ಹೀಗೆ
ನಮ್ಮ ನಡುವೆ
ಮಾತು ಬೆಳೆದಿದೆ?
ಕುರುಡು ಹಮ್ಮು
 ಬೇಟೆಯಾಡಿ
ಪ್ರೀತಿ ನರಳಿದೆ?

ಭೂಮಿ ಬಾಯ
ತೆರೆಯುತಿದೆ
ಬಾನು ಬೆಂಕಿ
ಸುರಿಯುತಿದೆ
ಧಾರೆ ಒಣಗಿ
ಚೀರುತಿದೆ
ಚಿಲುಮೆ ಎದೆಯಲಿ

ಮುಗಿಲ ಬರುವ
ಕಾಯುತಿದೆ
ಮಳೆಯ ಕನಸ
ನೇಯುತಿದೆ
ನಿನ್ನ ಬಯಸಿ
ಬೇಯುತಿದೆ
ನನ್ನ ಹೃದಯವು

                                               - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ


ಕಾಮೆಂಟ್‌ಗಳಿಲ್ಲ: