ಶುಕ್ರವಾರ, ಜನವರಿ 14, 2011

ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಸ್ವಾಗತ ಸಂಕ್ರಾಂತಿಯೇ!

ಸ್ವಾಗತ ಸಂಕ್ರಾಂತಿಯೇ
ಕಾಲ ತರುವ ಕ್ರಾಂತಿಯೇ,
ಹೊಸ ಬಾಳಿಗೆ ಹಸೆ ಹಾಸುವ
ಮಿತ್ರಾರುಣ ಕಾಂತಿಯೇ

ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ,
ಬಳಲಿದ ಕಾಲಿಗೆ ಬಲವನ್ನು ಊಡುವಂಥ ವರವೆ,
ಕನಸಿನ ಹೆದೆ ಚಿಮ್ಮಿ ಬಂದ ಆಕಾಂಕ್ಷೆಯ ಶರವೆ,
ಬವಣೆಯ ಭಾರವ ನೀಗಿ, ಬಾ ಓ ಸಂಕ್ರಾಂತಿಯೇ!

ಕಾಣದೊಂದು ಪಥಕಳೆಯುವ ಅನಿರೀಕ್ಷಿತ ಪಯಣವೆ
ಹೊಸ ಕಾಣ್ಕೆಗೆ ಎವೆ ಬಿಚ್ಚುವ ಬೆಳಕಿನೊಂದು ನಯನವೆ
ಎಳ್ಳು ಬೆಲ್ಲ ಜಲ್ಲೆ ಕಬ್ಬು ನಾಂದಿಯಾದ ಅಯನವೆ
ಭಾವೀ ದಿನಗಳ ಭಾಗ್ಯದ ಕದತೆರೆಯುವ ಕಿರಣವೆ!

ಬರಿ ಗಾಳಿಯೇ? ಬರಿ ಜಲವೇ? ಬರಿ ಬೆಳಕೇ? ಅಲ್ಲ,
ಬದಲಾಗಲಿ ಮುಡಿಯ ತನಕ ಇಡೀ ದೇಶವೆಲ್ಲ,
ಸತ್ಯ ಸ್ವಾಭಿಮಾನಯುಕ್ತ, ಬೇಧಮುಕ್ತ ಮನವ
ನೀಡಲಿ ಈ ಸಂಕ್ರಾಂತಿ ನೀಡಲಿ ಹೊಸ ದಿನವ

                                                  - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

1 ಕಾಮೆಂಟ್‌:

Unknown ಹೇಳಿದರು...

superb 👌👌
ದಿನವು ಹಿಗೆ ಕವಿತೆಗಳನ್ನು ಬರೆಯಲು ಮತ್ತು ೪ಜನರೊಡನೆ ಹಂಚಿಕೊಳ್ಳಲು yourqute appಅನ್ನು dodownlo ಮಾಡಿಅಲ್ಲಿ ಬರೆಯಲುಅನುಕುಲ ವಾದ app