ಸೋಮವಾರ, ಜನವರಿ 13, 2014

ಕವಿ-ವೇದಾಂತಿ

ವೇದಾಂತಿ ಹೇಳಿದನು:
ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
ಓ ಇವಳೆ ಚೆಲುವೆ
ಇವಳ ಜೊತೆಯಲಿ ನಾನು
ಸ್ವರ್ಗವನೆ ಗೆಲುವೆ!

ವೇದಾಂತಿ ಹೇಳಿದನು:
ಈ ಬದುಕು ಶೂನ್ಯ,
ಕವಿ ನಿಂತು ಸಾರಿದನು:
ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿವೆ
ನಾನೆಷ್ಟು ಧನ್ಯ!

                                     - ಜಿ. ಎಸ್. ಶಿವರುದ್ರಪ್ಪ
                                       'ಕಾರ್ತೀಕ' (೧೯೬೧)

ಕಾಮೆಂಟ್‌ಗಳಿಲ್ಲ: